25ರಂದು ಬಲಿಪರಿಗೆ ದೇರಾಜೆ ಸ್ಮೃತಿ ಗೌರವ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಫೆಬ್ರವರಿ 23 , 2015
|
ಫೆಬ್ರವರಿ 23, 2015
|
25ರಂದು ಬಲಿಪರಿಗೆ ದೇರಾಜೆ ಸ್ಮೃತಿ ಗೌರವ
ಸುಳ್ಯ :
ಚೊಕ್ಕಾಡಿ ಶ್ರೀರಾಮ ದೇವಾಲಯದ ಪ್ರತಿಷ್ಠಾ ವಾರ್ಷಿಕೋತ್ಸವ ಫೆ.25 ಮತ್ತು 26ರಂದು ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿ ಅವರ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿ ಉಚ್ಚಿಲ ಅವರ ನೇತೃತ್ವದಲ್ಲಿ ನಡೆಯಲಿದೆ.
ಫೆ.25ರಂದು ಉಗ್ರಾಣ ಮುಹೂರ್ತ, ಭಕ್ತಾದಿ ಗಳಿಂದ ಹಸಿರುವಾಣಿ ಸಮರ್ಪಣೆ, ಕುಂಕುಮಾ ರ್ಚನೆ-ಮಹಿಳೆಯರಿಂದ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ಭೋಜನ, ರಾತ್ರಿ ಪ್ರಾಸಾದ ಶುದ್ಧಿ, ವಾಸ್ತು ರಕ್ಷಾ ಹೋಮ, ವಾಸ್ತು ಬಲಿ, ವಾಸ್ತು ಪೂಜೆ ಮತ್ತು ಮಹಾಪೂಜೆ. ಫೆ. 26 ಗುರುವಾರ ಪ್ರತಿಷ್ಠಾ ವಾರ್ಷಿಕೋತ್ಸವ ಬಿಂಬ ಶುದ್ಧಿ, ಕಲಾಶಭಿಷೇಕ, ಮಹಾಗಣಪತಿ ಹವನ, ಅಶ್ವತ್ಥ ಪೂಜೆ, ನಾಗತಂಬಿಲ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಮಂಗಳಾರತಿ, ಅನ್ನಸಂತರ್ಪಣೆ, ರಾತ್ರಿ ದೀಪಾರಾಧನೆ, ರಾತ್ರಿ ದೇವರ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ನಡೆಯಲಿದೆ.
ಫೆ.25ರಂದು ದೇಸಿ ಭವನದಲ್ಲಿ ರಂಗಗೀತೆಗಳು, ಹೊ.ನ.ರಾಘವೇಂದ್ರ ಗರ್ತಿಕೆರೆ, ಶ್ರೀದೇವಿ ಗರ್ತಿಕೆರೆ ಅವರಿಂದ. ನಂತರ ಬಲಿಪ ನಾರಾಯಣ ಭಾಗವತ ಅವರಿಗೆ ದೇರಾಜೆ ಸ್ಮೃತಿ ಗೌರವ ಪ್ರದಾನ ಮಾಡಲಾಗುತ್ತದೆ. ಏರ್ಯ ಲಕ್ಷ್ಮಿನಾರಾಯಣ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ದೇರಾಜೆ ಸಂಸ್ಮರಣೆಯನ್ನು ಕಜೆ ಈಶ್ವರ ಭಟ್ ಮಾಡಲಿದ್ದಾರೆ. ಸನ್ಮಾನಿತರ ಅಭಿವಂದನೆಯನ್ನು ಡಾ.ಚಂದ್ರಶೇಖರ ಭಟ್ ದಾಮ್ಲೆ ಮಾಡಲಿದ್ದಾರೆ. ದೇರಾಜೆ ಕೃತಿ ಅನಾವರಣ ಭೀಷ್ಮಾರ್ಜುನ, ಸುಗ್ರೀವ ಸಖ್ಯ, ಮಹಾಭಾರತ ಅಕ್ಷಯ ಪಾತ್ರೆ ಬಿಡುಗಡೆ ಆಗಲಿದೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರದೀಪ್ಕುಮಾರ್ ಕಲ್ಕೂರ, ಪ್ರೊ.ಶಂಕರ್, ಜಿ.ಕೆ.ಭಟ್ ಸೇರಾಜೆ, ಶ್ರೀಕರ ಭಟ್ ಮರಾಠೆ, ಎಸ್.ಎನ್.ಪಂಜಾಜೆ, ಮೂರ್ತಿ ದೇರಾಜೆ, ಇಂದಿರಾ ಜಾನಕಿ ಶರ್ಮ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಬಲಿಪ ನಾರಾಯಣ ಭಾಗವತರು, ಲಕ್ಷ್ಮೀಶ ಅಮ್ಮಣ್ಣಾಯ, ಕುಮಾರ ಸುಬ್ರಹ್ಮಣ್ಯ ವಳ ಕ್ಕುಂಜ ಮುಮ್ಮೇಳದಲ್ಲಿ ಶಂಭು ಶರ್ಮ, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಾ ಭಟ್, ಸತ್ಯನ್ ದೇರಾಜೆ, ರಾಮ ಜೋಯಿಷ ಭಾಗವಹಿಸಲಿದ್ದಾರೆ.
ಕೃಪೆ :
http://vijaykarnataka.com
|
|
|